ಸಂತೋಷ ಯಳಮಲಿ, ಚೈತನ್ಯ ನ್ಯೂಸ್ 24 ನರೇಗಲ್ಲ ಜೂ.30:
ಗ್ರಾಮಸ್ಥರಲ್ಲಿ ರೋಮಾಂಚನ ಮೂಡಿಸಿದ್ದ ಕಾರಹುಣ್ಣಿಮೆಯ ಅತ್ಯಂತ ಸಾಹಸಮಯ ‘ಕರಿ ಹರಿಯುವ’ ಸ್ಪರ್ಧೆಯು ಅತ್ಯಂತ ರೋಮಾಂಚಕಾರಿಯಾಗಿ ಜರುಗಿದ್ದು, ಈ ಬಾರಿಯ ಕರಿಯನ್ನು ಶಿವಪುತ್ರಪ್ಪ ಒಳಕೋಟಿಯವರ ಎತ್ತು ಕರಿ ಹರಿದು ವೀರಾವೇಶ ಪ್ರದರ್ಶಿಸಿದ್ದು ಇಡೀ ಪಟ್ಟಣದ ಗಮನ ಸೆಳೆದಿದೆ. ಮುಂಗಾರು ಮಳೆಯ ಮುನ್ನುಡಿಯಾಗಿ ನಡೆದ ಈ ಸಾಂಪ್ರದಾಯಿಕ ಸ್ಪರ್ಧೆಯಲ್ಲಿ ವಿಜೇತ ಎತ್ತನ್ನು ಕಣ್ತುಂಬಿಕೊಳ್ಳಲು ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಜಮಾಯಿಸಿದ್ದರು.

ರಂಗೇರಿದ ಅಖಾಡ, ಹೆಚ್ಚಿದ ಧೂಳಿನ ರಣಕಳ:
ಗ್ರಾಮದ ಪ್ರಮುಖ ರಸ್ತೆಯಲ್ಲಿ ಮಾವು, ಬೇವು ಹಾಗೂ ರಂಗುರಂಗಿನ ಹೂವುಗಳಿಂದ ಸಿದ್ಧಪಡಿಸಲಾಗಿದ್ದ ‘ಕರಿ’ಯನ್ನು (ತೋರಣ) ಎತ್ತರದಲ್ಲಿ ಕಟ್ಟಲಾಗಿತ್ತು. ಸ್ಪರ್ಧೆಯ ಮಹೂರ್ತ ನಿಗದಿಯಾಗುತ್ತಿದ್ದಂತೆ, ಶೃಂಗಾರಗೊಂಡಿದ್ದ ಎಂಟಕ್ಕೂ ಎತ್ತುಗಳು ಅಖಾಡಕ್ಕೆ ಲಗ್ಗೆ ಇಟ್ಟವು. ಎತ್ತುಗಳ ಯಜಮಾನರ ಜಯಘೋಷ, ನೆರೆದಿದ್ದ ಜನರ ಚಪ್ಪಾಳೆ ಮತ್ತು ಸೀಟಿಗಳ ಸದ್ದಿನ ನಡುವೆ ಧೂಳಿನ ರಣಕಳವೇ ಸೃಷ್ಟಿಯಾಗಿತ್ತು.
ಮಿಂಚಿನ ವೇಗದಲ್ಲಿ ಬಂದು ಕರಿ ಹರಿದ ಬಿಳಿ ಬಸವಣ್ಣ:
ಸ್ಪರ್ಧೆಯು ಆರಂಭವಾಗುತ್ತಿದ್ದಂತೆ ಪ್ರತಿಯೊಂದು ಎತ್ತುಗಳು ಕರಿಯನ್ನು ಹರಿಯಲು ತೀವ್ರ ಪೈಪೋಟಿ ನಡೆಸಿದವು. ಈ ವೇಳೆ ಗ್ರಾಮದ ಹಿರಿಯ ರೈತ ಶಿವಪುತ್ರಪ್ಪ ಒಳಕೋಟಿ ಎತ್ತು, ಗಾಳಿಯ ವೇಗದಲ್ಲಿ ಧಾವಿಸಿ ಬಂದು ಭೋರ್ಗರೆಯುತ್ತಾ ಕರಿಯನ್ನು ಹರಿಯುವಲ್ಲಿ ಯಶಸ್ವಿಯಾಯಿತು. ಎತ್ತು ಕರಿಯನ್ನು ಹರಿಯುತ್ತಿದ್ದಂತೆ ಇಡೀ ಗ್ರಾಮಸ್ಥರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಸಮೃದ್ಧಿಯ ಸಂಕೇತ, ರೈತರಲ್ಲಿ ಹರ್ಷ:
ಗ್ರಾಮೀಣ ನಂಬಿಕೆಯ ಪ್ರಕಾರ, ಕರಿ ಹರಿದ ಎತ್ತು ಯಾವ ದಿಕ್ಕಿನಿಂದ ಬಂದಿರುತ್ತದೆಯೋ ಅಥವಾ ಯಾರದ್ದಾಗಿರುತ್ತದೆಯೋ, ಆ ಭಾಗದಲ್ಲಿ ಈ ವರ್ಷ ಉತ್ತಮ ಮಳೆ-ಬೆಳೆಯಾಗಲಿದ್ದು, ರೈತರಿಗೆ ಯಾವುದೇ ರೋಗ-ರುಜಿನಗಳ ಭೀತಿ ಇರುವುದಿಲ್ಲ. ಈ ಬಾರಿ ಕರಿ ಹರಿದ ಎತ್ತಿನ ಸಾಹಸವನ್ನು ಕಂಡ ಹಿರಿಯರು, “ಈ ವರ್ಷ ನಮ್ಮೂರಿಗೆ ಮಳೆಯಾಗಲಿದ್ದು, ಬಂಪರ್ ಬೆಳೆ ಬರುವುದು ಗ್ಯಾರಂಟಿ” ಎಂದು ಆನಂದಬಾಷ್ಪ ಸುರಿಸಿದರು.

ವಿಜೇತ ಎತ್ತಿಗೆ ರಾಜಮರ್ಯಾದೆ:
ಕರಿ ಹರಿದು ಸಾಹಸ ಮೆರೆದ ಎತ್ತಿಗೆ ಪಟ್ಟಣದ ಓಂ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಅಶೋಕ ಬೇವಿನಕಟ್ಟಿ ಹೂಮಾಲೆ ಹಾಕಿ ಕಾಲಿಗೆರಗಿ ನಮಸ್ಕರಿಸಿ ಎತ್ತಿನ ಮಾಲೀಕನಿಗೆ ಪ್ರತಿವಷದಂತೆ ಈ ವರ್ಷವೂ ಸನ್ಮಾನಿಸಿ ಗ್ರಾಮಸ್ತರ ಸಮ್ಮುಖದಲ್ಲಿ ೫೦೦೧ ನಗದು ಬಹುಮಾನ ನೀಡಿದರು, ಇದೇ ಸಂದರ್ಭದಲ್ಲಿ ಶೇಖರಗೌಡ ಪಾಟೀಲ ೧೦೦೧ ನಗದು ಬಹುಮಾನ ನೀಡಿದರು. ಎತ್ತಿನ ಹಣೆಗೆ ತಿಲಕವಿಟ್ಟು, ಹೂವಿನ ಹಾರ ಹಾಕಿ, ಆರತಿ ಎತ್ತಿ ಗೌರವಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಎತ್ತಿನ ಭವ್ಯ ಮೆರವಣಿಗೆ ನಡೆಸಿ, ಹೋಳಿಗೆ-ಕಡಬಿನ ನೈವೇದ್ಯವನ್ನು ಉಣಿಸಿ ಸತ್ಕರಿಸಲಾಯಿತು. ಇಡೀ ಹಳ್ಳಿಯಲ್ಲಿ ಹಬ್ಬದ ಸಡಗರದೊಂದಿಗೆ ವಿಜಯೋತ್ಸವದ ವಾತಾವರಣ ನರ್ಮಾಣವಾಗಿತ್ತು.
ಈ ವೇಳೆ ಪಟ್ಟಣದ ಮುಖಂಡರುಗಳಾದ ಬಾಳಪ್ಪ ಸೋಮಗೊಂಡ, ಸೋಮು ಲಕ್ಕನಗೌಡ್ರ ಬಸವರಾಜ ಮಾಳವಾಡ, ಶರಣಪ್ಪ ಹಂಜಿ, ಶರಣಪ್ಪ ಶೀಕನಿ, ವೀರಣ್ಣ ಗುಜಮಾಗಡಿ, ಶರಣಪ್ಪ ಕಲಾಲಬಂಡಿ, ಬಸವರಾಜ ಕಲಾಲಬಂಡಿ, ರಮೇಶ ಹತ್ತಿಕಟಗಿ, ಸಂಜೀವಕುಮಾರ ಕುಲರ್ಣಿ, ಶರಣಪ್ಪ ರ್ಮಾಯತ, ಮುತ್ತಣ್ಣ ಗೆದಗೇರಿ , ಫಕೀರಗೌಡ ಪಾಯಪ್ಪಗೌಡ್ರ, ಪರಪ್ಪ ಬೆಡಗಲ್ಲ, ವಿರುಪಾಪ್ಷ ಪಿಡಗೊಂಡ, ನೀಲಪ್ಪ ತೊಂಡಿಹಾಳ, ಅಶೋಕ ಧರಣೆಪ್ಪಗೌಡ್ರ, ಶಶಿಧರ ಓದಸೂಮಠ, ಅಶೊಕ ಮಧರಣೆಪ್ಪಗೌಡ್ರ, ಫಕೀರಸಾಬ ರೇವಡಿಗಾರ, ಸದ್ದಾಂ ನಶೇಖಾನ, ಶೇಖಪ್ಪ ಜುಟ್ಲ ಸೇರಿದಂತೆ ಹಲವಾರು ಪಟ್ಟಣದ ಮುಖಂಡರು, ಪೊಲೀಸ್ ಇಲಾಖಾ ಸಿಬ್ಬಂದಿಗಳು ರೈತಬಂಧುಗಳು ಕಾಯಕ್ರಮದಲ್ಲಿ ಭಾಗವಹಿಸಿದ್ದರು.