Home ಜಿಲ್ಲಾ ಸುದ್ದಿಗಳುವರುಣನ ಕೃಪೆಗಾಗಿ ಗುರ್ಜಿ ಸೇವೆ

ವರುಣನ ಕೃಪೆಗಾಗಿ ಗುರ್ಜಿ ಸೇವೆ

by Editor
0 comments

ಚೈತನ್ಯ ನ್ಯೂಸ್‌ 24 ಮುಳಗುಂದ: ಜೂ.23:
ಈ ಬಾರಿ ವರುಣದೇವ ನಮ್ಮ ಭಾಗದಲ್ಲಿ ಮುನಿಸಿಕೊಂಡಿದ್ದಾನೆ ಇಂದಿಗೂ ಒಮ್ಮೆಯೂ ಮಳೆ ಬರುತ್ತಿಲ್ಲ ಎಂಬ ಕಾರಣಕ್ಕೆ ಪಟ್ಟಣದ ಚೌಡನಪೇಟಿ ಹಾಗೂ ಗಣೇಶನಗರ ಓಣಿಯ ಮಹಿಳೆಯರು ವರುಣನ ಕೃಪೆಗಾಗಿ ಗುರ್ಜಿ ಸೇವೆ ಮಾಡಿ ಮನೆ ಮನೆಗೆ ತೆರಳಿ ವೃತ ಆಚರಿಸಿದರು.
ಮಳೆಗಾಗಿ ಅಬ್ಬಿಕೆರೆಯ ದಡದಲ್ಲಿರುವ ಅನ್ನದಾನೇಶ್ವರ ದೇವಸ್ಥಾನದಲ್ಲಿ ೯ ದಿನಗಳಿಂದ ದೀಪ ಹಚ್ಚಿ ಕಾಲ ಕಾಲಕ್ಕೆ ಎಣ್ಣೆ ಹಾಕಿ ಅದು ನಂದದAತೆ ನೋಡಿಕೊಂಡು, ಪ್ರತಿ ದಿನ ತೊಯ್ದ ಬಟ್ಟೆಯಲ್ಲಿ ಮನೆ ಮನೆಗೆ ತೆರಳಿ ಗುರ್ಜಿ ಸೇವೆ ಮಾಡಿ ಪ್ರತಿ ಮನೆಗಳಿಂದ ಜೋಳದ ಭಿಕ್ಷೆ ಹಾಗೂ ರೊಟ್ಟಿ ಬಿಕ್ಷಾಟನೆ ಮಾಡಿ ಮಹಿಳೆಯರು ದೇವಸ್ಥಾನದಲ್ಲಿ ಕುಳಿತು ತಂದ ರೊಟ್ಟಿಯನ್ನೇ ತಿಂದು ವೃತ ಆಚರಣೆ ಮಾಡಲಾಗುತ್ತಿದೆ.
ಬಂದ ಜೋಳದಿಂದ ಕೊನೆಯ ದಿನ ಪರುವನ್ನು ಮಾಡಿ ಬಂದವರಿಗೆಲ್ಲ ಸಂಗಟಿ ಸಾರು ಊಟ ಹಾಕಿ ಎಲ್ಲರಿಗೂ ನೀರನ್ನು ಗೊಜ್ಜಿ ತೊಯ್ದ ಮಡಿ ಬಟ್ಟೆಯಲ್ಲಿ ವರುಣ ದೇವನನ್ನು ಬೇಡಿಕೊಳ್ಳುವರು. ಹೀಗೆ ಹಳೆಯ ಸಂಪ್ರದಾಯದ ಆಚರಣೆಗೂ ಮಳೆಯ ಮೋಡಗಳು ಕಾಣುತ್ತಿಲ್ಲ ಎಂದು ಮಹಿಳೆಯರು ಆತಂಕದಲ್ಲಿದ್ದಾರೆ. ಆದರೆ ವೃತದ ಕೊನೆಯ ದಿನ ಏನಾಗುತ್ತದೆಯೋ ಕಾಯ್ದು ನೋಡಬೇಕಿದೆ.
ಮುಳಗುಂದ: ಪಟ್ಟಣದ ಚೌಡನಪೇಟಿ ಹಾಗೂ ಗಣೇಶನಗರ ಓಣಿಯ ಮಹಿಳೆಯರು ವರುಣನ ಕೃಪೆಗಾಗಿ ಗುರ್ಜಿ ಸೇವೆ ಮಾಡಿ ಮನೆ ಮನೆಗೆ ತೆರಳಿ ವೃತ ಆಚರಿಸಿದರು.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ